ಇಂದು ಜಗತ್ತೇ ಬೆರಗಾಗಿ ಭಾರತೀಯರು ಹೆಮ್ಮೆ ಪಡುವ ಸುದ್ದಿಯನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ

ಇಂದು ಜಗತ್ತೇ ಬೆರಗಾಗಿ ಭಾರತೀಯರು ಹೆಮ್ಮೆ ಪಡುವ ಸುದ್ದಿಯನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ
HIGHLIGHTS

ಭಾರತ ಬಾಹ್ಯಾಕಾಶದಲ್ಲಿ ಸೂಪರ್ ಶಕ್ತಿಯಿಂದ ಲೈವ್ ಸಟೆಲ್ಲೈಟ್ ಹೊಡೆದಾಕಿ ವಿಶ್ವದ ನಾಲ್ಕನೇ ದೊಡ್ಡ ರಾಷ್ಟ್ರವಾಗಿದೆ.

ವಿಶ್ವದಲ್ಲಿ ಅಮೇರಿಕ, ಚೀನಾ ಮತ್ತು ರಷ್ಯಾದ ನಂತರ ಭಾರತ ಯಾವುದೇ LEO (Low Earth Orbit) ಕಂಡುಬಂದಲ್ಲಿ ಹೊಡೆದುಹಾಕುವ ಮಹಾ ಶಕ್ತಿ ತಾಕತ್ತನ್ನು ಹೊಂದಿದೆ. ಒಟ್ಟಾರೆಯಾಗಿ 3 ನಿಮಿಷಗಳ ಈ ಮಿಷನ್ ಶಕ್ತಿ ಭಾರತ ಬಾಹ್ಯಾಕಾಶದಲ್ಲಿ ಸೂಪರ್ ಶಕ್ತಿಯಿಂದ ಲೈವ್ ಸಟೆಲ್ಲೈಟ್ ಹೊಡೆದಾಕಿ ವಿಶ್ವದ ನಾಲ್ಕನೇ ದೊಡ್ಡ ರಾಷ್ಟ್ರವಾಗಿದೆ.

ಭಾರತದಲ್ಲಿ ಬರುವ 11ನೇ ಏಪ್ರಿಲ್ 2019 ರಂದು ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತಕ್ಕೂ ಮುನ್ನವೇ ಇಂದು 27ನೇ ಏಪ್ರಿಲ್ 2019 ರಂದು ಮಧ್ಯಾಹ್ನ 12:00 ಕ್ಕೆ ದೇಶದ ಪ್ರಧಾನಮಂತ್ರಿ ಶ್ರೀಮನ್ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮುಖ್ಯ ಸಂದೇಶಯೊಂದಿಗೆ ಮಾತನಾಡಿದರು. ಈ ಪ್ರಮುಖ ಸಂದೇಶದೊಂದಿಗೆ ಮಾತುಕತೆ ನಡೆಸಿರುವುದನ್ನು ನೀವು ನೇರವಾಗಿ ಟೆಲಿವಿಷನ್, ರೇಡಿಯೊ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಲೈವಾಗಿ ನೋಡಬವುದು.

ಇಂದು ಪ್ರಧಾನಮಂತ್ರಿ ಶ್ರೀಮನ್ ನರೇಂದ್ರ ಮೋದಿಯವರ ಲೈವ್ ಭಾಷಣ ಅಪ್ಡೇಟ್. 

> ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮುಖ್ಯ ಸಂದೇಶಯೊಂದಿಗೆ ಪ್ರಾಂಭಿಸಿದರು.

> ಉಪಗ್ರಹ ವಿರೋಧಿ ಸಟೆಲ್ಲೈಟ್ ಕೇವಲ 3 ನಿಮಿಷಗಳಲ್ಲಿ ಲೈವ್ ಉಪಗ್ರಹವನ್ನು ನಾಶಪಡಿಸಿರುವುದಾಗಿ ಪ್ರಧಾನಮಂತ್ರಿ ಹೇಳಿದರು. 

> ಭಾರತ ತನ್ನ ಹೆಸರನ್ನು ಆ ಗಣ್ಯ ಬಾಹ್ಯಾಕಾಶ ಶಕ್ತಿಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆಯಂತೆ. 

> ಉಪ ಆಂಟಿ ಸಟೆಲ್ಲೈಟ್, A-SAT, ಕಡಿಮೆ ಭೂ ಕಕ್ಷೆಯಲ್ಲಿ ನೇರ ಉಪಗ್ರಹವನ್ನು ಯಶಸ್ವಿಯಾಗಿ ಗುರಿಯಾಗಿರಿಸಿದೆ.

> ಈ ಮಿಷನ್ ಶಕ್ತಿ ಕಾರ್ಯಚಟುವಟಿಕೆಯನ್ನು ಮೂರು ನಿಮಿಷಗಳ ಪ್ರಾರಂಭದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಸಾಧನೆಯು ಕಷ್ಟಕರ ಗುರಿಯಾಗಿದೆ.

> ಇಂದು ಸ್ವತಃ ಬಾಹ್ಯಾಕಾಶ ಶಕ್ತಿಯಾಗಿ ಭಾರತವನ್ನು ನೋಂದಾಯಿಸಿದ್ದು ಅಮೇರಿಕ, ರಷ್ಯಾ ಮತ್ತು ಚೀನಾ ಮಾತ್ರ ಈವರೆಗೆ ಸಾಧಿಸಿವೆ. 

> ಈ ಸಾಧನೆಯನ್ನು ಸಾಧಿಸಿದ ಭಾರತ ಅತಿ ದೊಡ್ಡ ಮಹಾ ಶಕ್ತಿಶಾಲಿ ಈಗ 4ನೇ ದೇಶವಾಗಿರುವುದಾಗಿ ಪ್ರಧಾನಿ ಹೇಳಿದರು. 

> ಇಂದು ನಾವು ಕೃಷಿ, ವಿಪತ್ತು ನಿರ್ವಹಣೆ, ಸಂವಹನ, ಹವಾಮಾನ, ನ್ಯಾವಿಗೇಷನ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಉಪಗ್ರಹಗಳನ್ನು ಹೊಂದಿದ್ದೇವೆ.

> ನಮ್ಮ ಈ ಹೊಸ ಪರಾಕ್ರಮ ಯಾರಿಗೂ ವಿರುದ್ಧವಾಗಿಲ್ಲ ಎಂದು ವಿಶ್ವ ಸಮುದಾಯಕ್ಕೆ ನಾನು ಭರವಸೆ ನೀಡುತ್ತೇನೆಂದು ಪ್ರಧಾನಿ ಹೇಳಿದರು.

> ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ A-SAT ಆಂಟಿ ಸಟೆಲ್ಲೈಟ್ ಹೊಸ ಶಕ್ತಿ ನೀಡುತ್ತದೆ ಎಂದು ಮೋದಿ ಹೇಳಿದರು. ಇದು ಯಾರ ವಿರುದ್ಧ ಭಾರತದ ಸಾಮರ್ಥ್ಯವನ್ನು ಬಳಸಲಾಗುವುದಿಲ್ಲ ಆದರೆ ದೇಶದ ಭದ್ರತೆಗಾಗಿ ಭಾರತದ ರಕ್ಷಣಾ ಉಪಕ್ರಮವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡಿದೆ.

> ಈ ಮಿಷನ್ ಶಕ್ತಿ ಮುಖ್ಯವಾಗಿ 2 ಕಾರಣಗಳಿ ವಿಶೇಷವಾಗಿದೆ. ಅಂತಹ ಒಂದು ವಿಶೇಷ ಮತ್ತು ಆಧುನಿಕ ಸಾಮರ್ಥ್ಯವನ್ನು ಪಡೆಯಲು ಭಾರತವು ನಾಲ್ಕನೇ ದೇಶವಾಗಿದೆ ಮತ್ತು ಸಂಪೂರ್ಣ ಪ್ರಯತ್ನ ದೇಶದ ವಿಜ್ಞಾನಿಗಳಿಗೆ ಧನ್ಯವಾದ ನೀಡಿದರು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo