Vikrant Rona ವಿಮರ್ಶೆ: ಪೂರ್ತಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ನಿಂದ ತುಂಬಿರುವ ಸಿನಿಮಾ! ಕಿಚ್ಚನ ನಟನೆಗೆ ಫ್ಯಾನ್ಸ್ ಫಿದಾ

HIGHLIGHTS

ಕಿಚ್ಚ ಸುದೀಪ್ (Kiccha Sudeep) ಮೇಲುಗೈ ಸಾಧಿಸಿದ್ದಾರೆ ಈ ಮೂಲಕ ಅಭಿನಯ ಚಕ್ರವರ್ತಿಯ ಬಗ್ಗೆ ನಿಮಗೆ ಉತ್ತಮ ಅನುಭವ ಸಿಗಲಿದೆ.

ವಿಕ್ರಾಂತ್ ರೋಣ (Vikrant Rona) ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಕ್ರಾಂತ್ ರೋಣ (Vikrant Rona) ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನವಾಗಿದೆ. ಅನೇಕ ಬಾರಿ ಏನಾಗುತ್ತಿದೆ ಎಂದು ಅರ್ಥವಾಗುವುದಿಲ್ಲ.

Vikrant Rona ವಿಮರ್ಶೆ: ಪೂರ್ತಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್‌ನಿಂದ ತುಂಬಿರುವ ಸಿನಿಮಾ! ಕಿಚ್ಚನ ನಟನೆಗೆ ಫ್ಯಾನ್ಸ್ ಫಿದಾ

ಈ ದಿನಗಳಲ್ಲಿ ದಕ್ಷಿಣದ ಚಿತ್ರಗಳ ವಿಮರ್ಶೆ ಎಷ್ಟರಮಟ್ಟಿಗಿದೆ ಎಂದರೆ ಯಾವ ಚಿತ್ರವು ಅಷ್ಟು ಚೆನ್ನಾಗಿ ಮಾಡಬಲ್ಲದು. ಕನ್ನಡ ಚಿತ್ರ ವಿಕ್ರಾಂತ್ ರೋಣ ಹಿಂದಿಗೆ ಡಬ್ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಚಿತ್ರದಲ್ಲಿ ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಜಾಕ್ವೆಲಿನ್ ಫರ್ನಾಂಡೀಸ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಅವರು ಕೇವಲ ಅತಿಥಿ ಪಾತ್ರದಲ್ಲಿದ್ದಾರೆ ಅಷ್ಟೇ. ನಿಗೂಢವಾಗಿರುವ ಈ ಚಿತ್ರದ ಕಥೆಯ ಬಗ್ಗೆ ಹೆಚ್ಚು ಹೇಳಲಾಗದು ಆದರೆ ಮುಖ್ಯ ಕಥಾವಸ್ತುವೆಂದರೆ ಒಂದು ಹಳ್ಳಿಯಲ್ಲಿ ಏನೋ ವಿಚಿತ್ರ ನಡೆಯುರುತ್ತದೆ ಮತ್ತು ಅದನ್ನು ಪರಿಹರಿಸಲು ಕಿಚ್ಚ ಸುದೀಪ್ ಇನ್ಸ್‌ಪೆಕ್ಟರ್ ವಿಕ್ರಾಂತ್ ರೋಣಾ ಅಲ್ಲಿಗೆ ಬರುತ್ತಾರೆ.

Digit.in Survey
✅ Thank you for completing the survey!

ವಿಕ್ರಾಂತ್ ರೋಣದ ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿಯ ನಟನೆ 

ಇಡೀ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮೇಲುಗೈ ಸಾಧಿಸಿದ್ದಾರೆ ಈ ಮೂಲಕ ಅಭಿನಯ ಚಕ್ರವರ್ತಿಯ ಬಗ್ಗೆ ನಿಮಗೆ ಉತ್ತಮ ಅನುಭವ ಸಿಗಲಿದೆ. ಅದರಲ್ಲೂ ಅವರ ಪ್ರವೇಶದಿಂದ ಅವರನ್ನು ತೋರಿಸುವ ಶೈಲಿ ಅದ್ಭುತವಾಗಿದೆ. ಕಿಚ್ಚ ಸುದೀಪ್ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಾರೆ. ಬೈಕ್ ಓಡಿಸುವಾಗ ಅಥವಾ ಜೀಪ್ ಓಡಿಸುವಾಗ ಸುದೀಪ್ ಅದ್ಭುತವಾಗಿ ಕಾಣುತ್ತಾರೆ. ಅವರ ಡೈಲಾಗ್ ಡೆಲಿವರಿ ಕೂಡ ಅದ್ಭುತ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಗೆ ಒಂದು ದೃಶ್ಯ ಮತ್ತು ಹಾಡು ಇದೆ. ಆಕೆಯನ್ನು ಚಿತ್ರದ ನಾಯಕಿಯಾಗಿ ಏಕೆ ಪ್ರಸ್ತುತಪಡಿಸಲಾಯಿತು ಎಂಬುದು ಗ್ರಹಿಕೆಗೆ ಮೀರಿದೆ. ಇದಲ್ಲದೇ ನಿರೂಪ್ ಭಂಡಾರಿ ನಟನೆ ಚೆನ್ನಾಗಿದೆ. ಉಳಿದ ಎಲ್ಲಾ ನಟರು ಕೂಡ ಉತ್ತಮ ಕೆಲಸ ಮಾಡಿದ್ದಾರೆ.

ವಿಕ್ರಾಂತ್ ರೋಣ ವಿಮರ್ಶೆ (Vikrant Rona Review) 

ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನವಾಗಿರುತ್ತದೆ. ಮತ್ತು ಅನೇಕ ಬಾರಿ ಏನಾಗುತ್ತಿದೆ ಎಂದು ಅರ್ಥವಾಗುವುದಿಲ್ಲ. ಗ್ರಾಮದಲ್ಲಿ ಯಾವಾಗಲೂ ಕತ್ತಲೆ ಏಕೆ? ರಾತ್ರಿಯಲ್ಲೇ ಎಲ್ಲಾ ಶೂಟಿಂಗ್ ಮಾಡ್ತಾರಾ? ಅನೇಕ ಭಯಾನಕ ದೃಶ್ಯಗಳು ನೀವು ಭಯಪಡುವ ರೀತಿಯಲ್ಲಿ ಬರುತ್ತವೆ ಮತ್ತು ಮಧ್ಯಂತರದ ಸಸ್ಪೆನ್ಸ್ ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದಾದ ನಂತರ ಚಿತ್ರದ ಕಥೆಯಲ್ಲಿ ಒಂದರ ಹಿಂದೆ ಒಂದರಂತೆ ಸಸ್ಪೆನ್ಸ್ ಬಂದು ಕುಳಿತಲ್ಲಿಂದ ಕದಲಲು ಕೂಡ ಅವಕಾಶ ಸಿಗುವುದಿಲ್ಲ. ಚಿತ್ರದ ಕಥೆಯಲ್ಲಿ ಹಲವು ಸ್ತರಗಳಿದ್ದು ಅಲರ್ಟ್ ಆಗಿ ಸಿನಿಮಾ ನೋಡಬೇಕು ಅಂದರೆ ಮೆದುಳನ್ನು ಬಳಸಬೇಕಾಗುತ್ತದೆ ಹೊರೆತು ಬೇಕಾಬಿಟ್ಟಿಯಾಗಿ ನೋಡಿದರೆ ಅಷ್ಟಾಗಿ ಅರ್ಥವಾಗೋದಿಲ್ಲ.  

ಚಿತ್ರದ ಸಂಗೀತವು ಕಥೆಯನ್ನು ಸ್ವಲ್ಪ ನಿಧಾನಗೊಳಿಸುತ್ತದೆ. ಮತ್ತು ಹಾಡುಗಳು ಅನಗತ್ಯವಾಗಿ ತುಂಬಿವೆ. ಆ್ಯಕ್ಷನ್ ಚೆನ್ನಾಗಿದೆ ಬೇರೆ ಮಾತಿಲ್ಲ. ಇದೇನೂ ಹೊಸದೇನಲ್ಲ ಆದರೆ ಚಿತ್ರದ ಜೀವನವೇ ಸಸ್ಪೆನ್ಸ್. ಅನೂಪ್ ಭಂಡಾರಿ ಚಿತ್ರವನ್ನು ನಿರ್ದೇಶಿಸಿದ್ದು ಅವರ ನಿರ್ದೇಶನ ಉತ್ತಮವಾಗಿದೆ. ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಮೊದಲಾರ್ಧವನ್ನು ಸ್ವಲ್ಪ ಚೆನ್ನಾಗಿ ಮಾಡಬಹುದಿತ್ತು ಎನ್ನುವುದು ನಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo