ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಇ-ಕೆವೈಸಿ (e-KYC) ಹಗರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ತನ್ನ ಚಂದಾದಾರರಿಗೆ ಬರೆದ ಪತ್ರದಲ್ಲಿ ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಬ್ಬರು ಸೈಬರ್ ವಂಚನೆಗಳ ಹೆಚ್ಚುತ್ತಿರುವ ಘಟನೆಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಅಮಾಯಕ ಗ್ರಾಹಕರನ್ನು ವಂಚಿಸಲು ಸ್ಕ್ಯಾಮ್ಸ್ಟರ್ಗಳು ಬಳಸುತ್ತಿರುವ ವಿಧಾನವನ್ನು ಕಂಪನಿಯು ವಿವರಿಸಿದೆ. ಈ ವರ್ಷದ ಆರಂಭದಲ್ಲಿ ಭಾರತಿ ಏರ್ಟೆಲ್ ಮತ್ತು ವೊಡಾಫೋನ್ನ ಸಿಇಒಗಳು ತಮ್ಮ ಗ್ರಾಹಕರಿಗೆ ಕಳುಹಿಸಿದ ಇದೇ ರೀತಿಯ ಎಚ್ಚರಿಕೆ ಪತ್ರಗಳ ನಂತರ ರಿಲಯನ್ಸ್ ಜಿಯೋ ಪತ್ರ ಬಂದಿದೆ.
Survey
✅ Thank you for completing the survey!
ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರನ್ನು ಏನು ಮಾಡಬಾರದು ಮತ್ತು ಏಕೆ ಎಂದು ಕೇಳುವ ಪ್ರಮುಖ ವಿಷಯಗಳು ಇಲ್ಲಿವೆ. ಜಿಯೋ ತನ್ನ ಪ್ರಕಟನೆಯಲ್ಲಿ ಗ್ರಾಹಕರು ತಮ್ಮ ಕೆವೈಸಿ ಅಥವಾ ಆಧಾರ್ (KYC/Aadhaar) ವಿವರಗಳನ್ನು ನವೀಕರಿಸಲು ಯಾವುದೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡದಂತೆ ಎಚ್ಚರಿಕೆ ನೀಡಿದೆ. ಇಂತಹ ಚಟುವಟಿಕೆಗಳಿಗೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್ಲೋಡ್ ಮಾಡುವಂತೆ ಜಿಯೋ ಎಂದಿಗೂ ನಿಮ್ಮನ್ನು ಕೇಳುವುದಿಲ್ಲವೆಂದು ತಿಳಿಸಿದೆ. ದಯವಿಟ್ಟು ಇಂತಹ ಎಸ್ಎಂಎಸ್ ಅಥವಾ ಕರೆಗಳು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು.
ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಡಿ ಏಕೆಂದರೆ ವಂಚಕರು ನಿಮ್ಮ ಎಲ್ಲಾ ಫೋನ್ ಮಾಹಿತಿಯನ್ನು ಕದ್ದು ವಂಚನೆ ಎಸಗುತ್ತಾರೆ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ವಂಚಕರು ಜಿಯೋ ಪ್ರತಿನಿಧಿಗಳಂತೆ ವರ್ತಿಸಿ ಮುಖ್ಯವಾಗಿ ಬಾಕಿ ಉಳಿದಿರುವ ಇ-ಕೆವೈಸಿ (eKYC-Know Yourself) ಗ್ರಾಹಕರ ಆಧಾರ್, ಬ್ಯಾಂಕ್ ಖಾತೆಗಳು ಇತ್ಯಾದಿ ವಿವರಗಳ ನೆಪದಲ್ಲಿ OTP ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಒತ್ತಾಯಿಸುತ್ತಾರೆ. ಮಾಹಿತಿ ಪಡೆದ ಬಳಿಕ ಅವರು ನಿಮಗೆ ಗೊತ್ತಾಗದಂತೆ ವಂಚಿಸುತ್ತಾರೆ.
ಇದರಿಂದ ಇಂಥಹ ಯಾವುದೇ ಆಮೀಷಕ್ಕೆ ಒಳಗಾಗಬೇಡಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ. ಇ-ಕೆವೈಸಿ ಪೂರ್ಣಗೊಳಿಸಲು ಕೇಳುವ ಯಾವುದೇ ಎಸ್ಎಂಎಸ್/ಕರೆಯನ್ನು ನಂಬಬೇಡಿ ಅಥವಾ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ನಿಮ್ಮ ಮೊಬೈಲ್ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎನ್ನುವ ಮೋಸದ ಕರೆಗಳಿಗೆ ಬಲಿಯಾಗಬೇಡಿ ಎಂದು ರಿಲಯನ್ಸ್ ಜಿಯೋ (Reliance Jio) ಹೇಳಿದೆ. ಗ್ರಾಹಕರು ಜಿಯೋ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡುವವರು ಕಳುಹಿಸುವ ಸಂದೇಶಗಳಲ್ಲಿ ಸ್ವೀಕರಿಸಿದ ಯಾವುದೇ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
ಇದು ಕೂಡ ಒಂದು ರೀತಿಯ ಸೈಬರ್ ಕ್ರೈಮ್. ಹೀಗಾಗಿ ರಿಲಯನ್ಸ್ ಜಿಯೋ (Reliance Jio) ಗ್ರಾಹಕರು ಯಾವುದೇ ಮೋಸದ ಕರೆಗಳಿಗೆ ಬಲಿಯಾಗಬಾರದು. ಯಾವುದೇ ಕಾರಣಕ್ಕೂ ಮುಖ್ಯವಾಗಿರುವ ಮಾಹಿತಿಯನ್ನು ನೀಡಬಾರದು ಎಂದು ಜಿಯೋ ತನ್ನ ಗ್ರಾಹಕರಿಗೆ ತಿಳಿಸಿದೆ. MyJio ಅಪ್ಲಿಕೇಶನ್ನಲ್ಲಿ ಎಲ್ಲಾ ಸಂಬಂಧಿತ ಮಾಹಿತಿಯನ್ನು ಕಾಣಬಹುದು. ಏಕೆಂದರೆ ಇಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಗ್ರಾಹಕರನ್ನು ಎಂದಿಗೂ ಕೇಲುವುದಿಲ್ಲ ಎಂದು ಕಂಪನಿ ಹೇಳಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile