Bhairathi Ranagal: ಕನ್ನಡದ ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ OTT ಪ್ಲಾಟ್‌ಫಾರ್ಮ್‌ಗೆ ಈ ದಿನ ಎಂಟ್ರಿ ಕೊಡಲಿದೆ!

HIGHLIGHTS

ಶಿವರಾಜ್ ಕುಮಾರ್ (Shiva Rajkumar) ಅಭಿನಯದ ಕನ್ನಡದ ಆಕ್ಷನ್ ಥ್ರಿಲ್ಲರ್ 'ಭೈರತಿ ರಣಗಲ್' (Bhairathi Ranagal).

'ಭೈರತಿ ರಣಗಲ್' (Bhairathi Ranagal) ಸಿನಿಮಾ ಕೊನೆಗೂ OTT ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡಲು ಡೇಟ್ ಫಿಕ್ಸ್ ಆಗಿದೆ.

ಆಕ್ಷನ್ ಥ್ರಿಲ್ಲರ್ 'ಭೈರತಿ ರಣಗಲ್' (Bhairathi Ranagal) ಸಿನಿಮಾ ಫೆಬ್ರವರಿ 13 ರಂದು ಆಹಾದಲ್ಲಿ 'ಭೈರತಿ ರಣಗಲ್ ಬಿಡುಗಡೆ.

Bhairathi Ranagal: ಕನ್ನಡದ ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ OTT ಪ್ಲಾಟ್‌ಫಾರ್ಮ್‌ಗೆ ಈ ದಿನ ಎಂಟ್ರಿ ಕೊಡಲಿದೆ!

Bhairathi Ranagal OTT Release: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ ಕನ್ನಡದ ಅತಿ ಜನಪ್ರಿಯ ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಕೊನೆಗೂ OTT ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ನೀಡಲು ಡೇಟ್ ಫಿಕ್ಸ್ ಆಗಿದೆ. ಈ ಸಿನಿಮಾ 15ನೇ ನವೆಂಬರ್ 2024 ರಂದು ಬಿಡುಗಡೆಯಾಯಿತು ಇದನ್ನು ಅವರದೇ ಶಿವಣ್ಣನವರ ಗೀತಾ ಪಿಕ್ಚರ್ಸ್ ಅಡಿಯಲ್ಲಿ ಬಂದಿರುವ ಈ ಸಿನಿಮಾ ಈಗಾಗಲೇ ಬಿಡುಗಡೆಯಾದ ಮುಫ್ತಿ ಸಿನಿಮಾದ ಪ್ರೀಕ್ವೆಲ್ ಸಿನಿಮಾ ಆಗಿದ್ದು ಈಗ ಅದರ OTT ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಫೆಬ್ರವರಿ 13 ರಂದು ಆಹಾದಲ್ಲಿ ‘ಭೈರತಿ ರಣಗಲ್ ಬಿಡುಗಡೆಯಾಗಲಿದೆ

Digit.in Survey
✅ Thank you for completing the survey!

Bhairathi Ranagal OTT Release ಯಾವ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ?

ಈ ಕನ್ನಡದ ಜನಪ್ರಿಯ ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಫೆಬ್ರವರಿ 13 ರಂದು ಆಹಾದಲ್ಲಿ ‘ಭೈರತಿ ರಣಗಲ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಪ್ರಕಟಿಸಿದ್ದಾರೆ. ಒಟಿಟಿ ವೇದಿಕೆಯು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು “ಒಬ್ಬ ದರೋಡೆಕೋರರು ಎಂದಿಗೂ ಹುಟ್ಟಲಿಲ್ಲ ಅವನನ್ನು ಸೃಷ್ಟಿಸಲಾಯಿತು. ಇದರ ಬಗ್ಗೆ aha ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಕನ್ನಡ ಜನಪ್ರಿಯ ಸಿನಿಮಾ ಇದೆ 13ನೇ ಫೆಬ್ರವರಿ 2025 ರಿಂದ #aha OTT ಅಲ್ಲಿ ಪ್ರಸಾರವಾಗಲಿರುವ ‘ಭೈರತಿ ರಣಗಲ್’ ಚಿತ್ರದ ನಿರ್ಮಾಣವನ್ನು ವೀಕ್ಷಿಸಿ! #BhairathiRanagal @nimmashivarajkumar” ಎಂದು ಬರೆದಿದ್ದಾರೆ. ನೀವು ಚಿತ್ರಮಂದಿರ ಮತ್ತು ಪ್ರೈಮ್ ವಿಡಿಯೋದಲ್ಲಿ ನೋಡುವುದನ್ನು ತಪ್ಪಿಸಿಕೊಂಡಿದ್ದರೆ 13ನೇ ಫೆಬ್ರವರಿ 2025 ರಿಂದ ಆಹಾ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದು.

Also Read: Passport New Rules: ಪಾಸ್‌ಪೋರ್ಟ್‌ಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ! ಏನದು 5 ಹೊಸ ನಿಯಮಗಳು?

ಭೈರತಿ ರಣಗಲ್ ಬಗ್ಗೆ ಒಂದಿಷ್ಟು ಮಾಹಿತಿ

ಈ ಕಥೆಯು ರಣಗಲ್ ಎಂಬ ವ್ಯಕ್ತಿ ಮತ್ತು ಅವನ ಹುಟ್ಟಿನಿಂದ ಅಧಿಕಾರಕ್ಕೆ ಬರಲು ಅವನು ನಡೆಸುವ ಹೋರಾಟಗಳ ಬಗ್ಗೆ. ಅವನು ರೋಣಾಪುರದ ಅತ್ಯಂತ ಭಯಾನಕ ದರೋಡೆಕೋರನಾದದ್ದನ್ನು ಇದು ತೋರಿಸುತ್ತದೆ. ಆಕ್ಷನ್ ನಾಟಕದಲ್ಲಿ ಶಿವ ರಾಜ್‌ಕುಮಾ‌ರ್, ರುಕ್ಷ್ಮಿಣಿ ವಸಂತ್, ಛಾಯಾ ಸಿಂಗ್, ರಾಹುಲ್ ಬೋಸ್, ಶಬೀರ್ ಕಲ್ಲರಕ್ಕಲ್, ಮಧು ಗುರುಸ್ವಾಮಿ ಮತ್ತು ಶ್ರೀ ಮುರಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಮನಾರ್ಹವಾಗಿ ಶಿವ ರಾಜ್‌ಕುಮಾರ್ ಅವರ ಅಭಿನಯಕ್ಕಾಗಿ ಪ್ರಶಂಸೆ ವ್ಯಕ್ತವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo